ಮೇಲಿನವರು : ಹಲೋ..ಇವತ್ತಿನ ಪ್ರೋಗ್ರೆಸ್ ಹೇಳಿ;ನಿಮಗೆ ಸಿಕ್ಕಿರೋ ಪಟ್ಟಿಯಲ್ಲಿ ಇವತ್ತು ಎಷ್ಟು ಜನ ಮೂಗಿನಲ್ಲಿ ಉಸಿರಾಡುವವರು? ಕೆಳಗಿನವರು : ಹಲೋ.. xyz ಸರ್... ಮೇಲಿನವರು : ಬಾಯಿಯಲ್ಲಿ ಉಸಿರಾಡುವವರು ಎಷ್ಟು? ಕೆಳಗಿನವರು : pqr ಸರ್... ಮೇಲಿನವರು : ಅದರಲ್ಲಿ ಸತ್ತವರು ಎಷ್ಟು? ಕೆಳಗಿನವರು : ಬಾಯಿಯಲ್ಲಿ ಉಸಿರಾಡುವವರಲ್ಲಾ ಸರ್? ಮೇಲಿನವರು : ಹೌದು.. ಅಲ್ಲ... ಉಸಿರಾಡುವವರಲ್ಲಿ ಸತ್ತವರೆಷ್ಟು? ಕೆಳಗಿನವರು : ಸರ್ ಸತ್ತವರು ಉಸಿರಾಡಕ್ಕಾಗುತ್ತಾ? ಮೇಲಿನವರು : ಸತ್ತವರೆಷ್ಟು ಹೇಳ್ರಿ.. ಕೆಳಗಿನವರು : abc ಸರ್... ಮೇಲಿನವರು : ಸರಿ ನಾಳೆ ಮತ್ತೆ ಕೇಳ್ತೇನೆ... ಕೆಳಗಿನವರು : ಸರ್ ಇನ್ನೊಂದು ಪ್ರೋಗ್ರೆಸ್ ಇದೆ ಸರ್.. ಮೇಲಿನವರು : ಏನು? ಕೆಳಗಿನವರು : ಸರ್ ಉಸಿರಾಡುವವರಲ್ಲಿ ಸತ್ತವರು ಕೆಳಗಿನವರು ಮತ್ತೆ ಸತ್ತವರಲ್ಲಿ ಉಸಿರಾಡುವವರು ಮೇಲಿನವರು.... ಇವರ ಅಂಕಿ ಅಂಶ ನಿಮ್ಮಲ್ಲೇ ಕಚೇರಿಯಲ್ಲಿರುತ್ತೆ ಸರ್...
Popular posts from this blog
ಸಮೀಕ್ಷೆ
ಸಮೀಕ್ಷೆ - 1 ಹೊರಗೆ ಜೋರು ಮಳೆ. ಆ ಜೋರು ಮಳೆಯಲ್ಲೇ ನೆನೆದು ತೊಪ್ಪೆಯಾಗಿ ಬಂದ ಸಮೀಕ್ಷೆ ಬಾಗಿಲ ಬಳಿ ನಿಂತು ಕೆಲಸ ಆರಂಭಿಸಿತು. ಪ್ರಶ್ನೆ : ಅದು ಉಂಟಾ? ಉತ್ತರ : ಇಲ್ಲ ಪ್ರಶ್ನೆ : ಇದು ಉಂಟಾ? ಉತ್ತರ : ಛೇ.. ಏನೂ ಇಲ್ಲ.. ಪ್ರಶ್ನೆ : ಅದು ಎಷ್ಟಿದೆ? ಉತ್ತರ : ಏನಿಲ್ಲ ಪ್ರಶ್ನೆ : ಅದು ಇಲ್ಲವಾ? ಉತ್ತರ : ಎಂಥದೂ ಇಲ್ಲ.. ಪ್ರಶ್ನೆ : ಮತ್ತೆ ಇ... ಉತ್ತರ : ನಿಮಗ್ಯಾಕೆ ಇದೆಲ್ಲಾ? ಏನಿಲ್ಲ, ಏನೂ ಇಲ್ಲ... ಪ್ರಶ್ನಿಸುವವರು : ಸರಿ ಬಿಡಿ..... ನೆನೆದು ತೊಪ್ಪೆಯಾದ ಸಮೀಕ್ಷೆ ಜೋರು ಮಳೆಯಲ್ಲಿ ಮತ್ತೊಂದು ಮನೆಗೆ ಹೊರಡುವಷ್ಟರಲ್ಲಿ ಒಳಗಿನಿಂದ ಉತ್ತರಿಸುವವರು ಹೇಳಿದ್ದು ಸಿಡಿಲಿನಂತೆ ಕೇಳಿಸಿತು.. " ಹೀಗೆ ಹುಚ್ಚುಮಳೆ ಹೊಯ್ದರೆ ಈ ಸಲ ಕರಿಮೆಣಸು ಎಂಟು ಟನ್ ಸಿಗೋದೂ ಡೌಟೇಯಾ.." ನೆನೆದು ತೊಪ್ಪೆಯಾದ ಸಮೀಕ್ಷೆ ಒಂದು ಟನ್ನಿನ ಬೆಲೆ ಇಷ್ಟಾದರೆ ಎಂಟು ಟನ್ನಿನ ಬೆಲೆ ಎಷ್ಟು ಎಂದು ಬಡಬಡಿಸುತ್ತಾ ಬೇರೆ ಮನೆ ಹುಡುಕುತ್ತಾ ಹೋಯಿತು.. ಇದನ್ನೆಲ್ಲಾ ನೋಡುತ್ತಿದ್ದ ಮನೆಯಲ್ಲಿದ್ದ SUV ಕಾರು, ಅದು ಇದು ಮುಂತಾದವೆಲ್ಲಾ ಪಕಪಕನೇ ನಕ್ಕುಬಿಟ್ಟವು... ಸಮೀಕ್ಷೆ - 2 ನೆನೆದು ತೊಪ್ಪೆಯಾದ ಸಮೀಕ್ಷೆ ಅದು ಹೇಗೋ ಕಷ್ಟಪಟ್ಟು ಮನೆ ಹುಡುಕಿ ತಲುಪಿ ಬಿಟ್ಟಿತು. ಗೇಟಿನಿಂದಲೇ ಬಾಯಿಗೆ ಬಂದಂತೆ ಬೊಗಳುತ್ತಿದ್ದ ನಾಯಿ ಏನು ಹೇಳಿದ್ದು ಅಂತಾನೆ ಗೊತ್ತಾಗ್ಲಿಲ್ಲ.. ಆಮೇಲೆ ಮನೆಯವರು ಅದನ್ನ ಅರ್ಥ ಆಗೋ ಭಾಷೆಯಲ್ಲಿ ಹೇಳಿದ್ರು. "ಯಾರೋ ಬಂದು ಮ...
***** ಕವಿತೆಯಾಗುವುದೆಂದರೇನು!?*****
ಕವಿತೆಯಾಗುವುದೆಂದರೇನು!? ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ ಬೀದಿ ನಾಯಿಗೆ ಲೈಟುಗಂಬವೊಂದು ಕೇಳಿತು,... ಕತ್ತಲೊಳಗಿನ ಬೆಳಕನ್ನು ಬೆಳಕಿನೊಳಗಿನ ಕತ್ತಲನ್ನೂ ಕಂಡು ಊಳಿಡುವುದೇ ಕವಿತೆಯೆಂದಿತು ನಾಯಿ ಲೈಟುಗಂಬಕ್ಕೂ ನಿಜವೆನ್ನಿಸಿತೇನೋ,,, ಅಷ್ಟಕ್ಕೇ ಕರೆಂಟು ಹೋಗಿ ಕತ್ತಲಿಗೂ ಬೆಳಕಿಗೂ ಕಾದಾಟವಾಗಿ ಬೀದಿಯುದ್ದಕ್ಕೂ ಊಳಿಡುವಿಕೆ ಕವಿತೆಯಾಯಿತು,,... ಕವಿತೆಯಾಗುವುದೆಂದರೇನು!? ಪರಪರ ಕೆರೆದುಕೊಳ್ಳುತ್ತಾ ಕಾಲನೆಳೆದು ನಡೆಯುತ್ತಿದ್ದ ಹುಚ್ಚನಿಗೆ ರಸ್ತೆಯೊಂದು ಕೇಳಿತು,,, ಮಾತಿನೊಳಗಿನ ಅರ್ಥವನ್ನು ಅರ್ಥದೊಳಗಿನ ಮಾತನ್ನೂ ಕಂಡು ಗಲಗಲ ನಕ್ಕು ಅಳುವುದೇ ಕವಿತೆಯೆಂದ ರಸ್ತೆಗೂ ನಿಜವೆನ್ನಿಸಿತೇನೋ... ಅಷ್ಟಕ್ಕೇ 'ಅದು-ಇದು' ತಿನ್ನುವವರ ನಡುವೆ ಗಲಭೆಯಾಗಿ ಮಾತಿಗೂ ಅರ್ಥಕ್ಕೂ ಕಾದಾಟವಾಗಿ ರಸ್ತೆಯುದ್ದಕ್ಕೂ ನಗು-ಅಳು ಕವಿತೆಯಾಯಿತು,,., ಇದೀಗ,... ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದವಾಗಿ ಕವಿತೆಯ ಕೊಲೆಯಾಗಿದೆ,,,, - ಜಾನ್ ಸುಂಟಿಕೊಪ್ಪ.
Comments
Post a Comment