ನಾನು ಆತ್ಮಸಾಕ್ಷಿ ಕಳಕೊಡ ದಿನ
ನನ್ನೊಳಗಿನ ಸೈತಾನ ದಡಬಡಿಸಿ ಎದ್ದು ಕೂತ;
ನಾನು ಆತ್ಮಸಾಕ್ಷಿ ಕಳಕೊಂಡ ದಿನ
ಏಸುವಿಗೆ ಕೆಲಸವಿಲ್ಲದಾಯಿತು;
ನಾನು ಆತ್ಮಸಾಕ್ಷಿ ಕಳಕೊಂಡ ದಿನ
ನನ್ನ ಕಾವಲುಧೂತ ಬಿಕ್ಕಿಬಿಕ್ಕಿ ಅಳುತ್ತಿದ್ದ;
ನಾನು ಆತ್ಮಸಾಕ್ಷಿ ಕಳಕೊಂಡ ದಿನ
ಕಲ್ವಾರಿಗೆ ಲೋಡುಗಟ್ಟಲೆ ಮೊಳೆಗಳು ಸರಬರಾಜಾದುವು;
ನಾನು ಆತ್ಮಸಾಕ್ಷಿ ಕಳಕೊಂಡ ದಿನ
ಬೀದಿಬೀದಿಯಲಿ ಸೈತಾನನಿಗೆ ವಿಜಯೋತ್ಸವ;
ನಾನು ಆತ್ಮಸಾಕ್ಷಿ ಕಳಕೊಂಡ ಆ ದಿನ
ನನ್ನೊಳಗಿನ ನರಕಕ್ಕೇ ಸ್ವಾತಂತ್ರ್ಯ..
'ದೇಶಭಕ್ತರ' ಈ ನರಕದಲ್ಲಿ
ನನಗೇ ಪಿತಾಮಹನ ಪಟ್ಟ!
- ಜಾನ್ ಸುಂಟಿಕೊಪ್ಪ.
http://johnsunticoppa.blogspot.com/2017/03/blog-post.html
ಸಮೀಕ್ಷೆ
ಸಮೀಕ್ಷೆ - 1 ಹೊರಗೆ ಜೋರು ಮಳೆ. ಆ ಜೋರು ಮಳೆಯಲ್ಲೇ ನೆನೆದು ತೊಪ್ಪೆಯಾಗಿ ಬಂದ ಸಮೀಕ್ಷೆ ಬಾಗಿಲ ಬಳಿ ನಿಂತು ಕೆಲಸ ಆರಂಭಿಸಿತು. ಪ್ರಶ್ನೆ : ಅದು ಉಂಟಾ? ಉತ್ತರ : ಇಲ್ಲ ಪ್ರಶ್ನೆ : ಇದು ಉಂಟಾ? ಉತ್ತರ : ಛೇ.. ಏನೂ ಇಲ್ಲ.. ಪ್ರಶ್ನೆ : ಅದು ಎಷ್ಟಿದೆ? ಉತ್ತರ : ಏನಿಲ್ಲ ಪ್ರಶ್ನೆ : ಅದು ಇಲ್ಲವಾ? ಉತ್ತರ : ಎಂಥದೂ ಇಲ್ಲ.. ಪ್ರಶ್ನೆ : ಮತ್ತೆ ಇ... ಉತ್ತರ : ನಿಮಗ್ಯಾಕೆ ಇದೆಲ್ಲಾ? ಏನಿಲ್ಲ, ಏನೂ ಇಲ್ಲ... ಪ್ರಶ್ನಿಸುವವರು : ಸರಿ ಬಿಡಿ..... ನೆನೆದು ತೊಪ್ಪೆಯಾದ ಸಮೀಕ್ಷೆ ಜೋರು ಮಳೆಯಲ್ಲಿ ಮತ್ತೊಂದು ಮನೆಗೆ ಹೊರಡುವಷ್ಟರಲ್ಲಿ ಒಳಗಿನಿಂದ ಉತ್ತರಿಸುವವರು ಹೇಳಿದ್ದು ಸಿಡಿಲಿನಂತೆ ಕೇಳಿಸಿತು.. " ಹೀಗೆ ಹುಚ್ಚುಮಳೆ ಹೊಯ್ದರೆ ಈ ಸಲ ಕರಿಮೆಣಸು ಎಂಟು ಟನ್ ಸಿಗೋದೂ ಡೌಟೇಯಾ.." ನೆನೆದು ತೊಪ್ಪೆಯಾದ ಸಮೀಕ್ಷೆ ಒಂದು ಟನ್ನಿನ ಬೆಲೆ ಇಷ್ಟಾದರೆ ಎಂಟು ಟನ್ನಿನ ಬೆಲೆ ಎಷ್ಟು ಎಂದು ಬಡಬಡಿಸುತ್ತಾ ಬೇರೆ ಮನೆ ಹುಡುಕುತ್ತಾ ಹೋಯಿತು.. ಇದನ್ನೆಲ್ಲಾ ನೋಡುತ್ತಿದ್ದ ಮನೆಯಲ್ಲಿದ್ದ SUV ಕಾರು, ಅದು ಇದು ಮುಂತಾದವೆಲ್ಲಾ ಪಕಪಕನೇ ನಕ್ಕುಬಿಟ್ಟವು... ಸಮೀಕ್ಷೆ - 2 ನೆನೆದು ತೊಪ್ಪೆಯಾದ ಸಮೀಕ್ಷೆ ಅದು ಹೇಗೋ ಕಷ್ಟಪಟ್ಟು ಮನೆ ಹುಡುಕಿ ತಲುಪಿ ಬಿಟ್ಟಿತು. ಗೇಟಿನಿಂದಲೇ ಬಾಯಿಗೆ ಬಂದಂತೆ ಬೊಗಳುತ್ತಿದ್ದ ನಾಯಿ ಏನು ಹೇಳಿದ್ದು ಅಂತಾನೆ ಗೊತ್ತಾಗ್ಲಿಲ್ಲ.. ಆಮೇಲೆ ಮನೆಯವರು ಅದನ್ನ ಅರ್ಥ ಆಗೋ ಭಾಷೆಯಲ್ಲಿ ಹೇಳಿದ್ರು. "ಯಾರೋ ಬಂದು ಮ...
Comments
Post a Comment