Posts

Showing posts from April, 2020

ಆಗ ಕತ್ತಲಾಗಿತ್ತು - ಒಂದು ಅನುವಾದಿತ ಕವಿತೆ

*ಆಗ ಕತ್ತಲಾಗಿತ್ತು*            1 ಯೂದ ಎದ್ದು ಹೋದಾಗ ಕತ್ತಲಾಗಿತ್ತು ! ಪ್ರಭುವಿನ ಎದೆಯಂಗಳದಲ್ಲೀಗ ಹುಣ್ಣಿಮೆ         2 ಯೂದ ಬಿಟ್ಟುಹೋದ ದ್ರಾಕ್ಷಾರಸವನ್ನು ಯೇಸು ಕುಡಿದು ಬಿಟ್ಟರು ಅದಕ್ಕೋ ಏನೋ ಯೂದನ ಮುತ್ತು 'ದ್ರೋಹ' ಎಂದೆನ್ನಿಸಲೇ ಇಲ್ಲ!           3 ಸಿಪಾಯಿಗಳೊಂದಿಗೆ ಯೂದ ಬಂದಾಗ ತೋಳಗಳ ಗುಂಪಿನಲ್ಲಿ ಸಿಕ್ಕಿಕೊಂಡ 'ಕುರಿಮರಿ'ಯಂತೆಯೇ ಕಾಣುತ್ತಿದ್ದ... ಕುರಿಗಾಹಿ ಪ್ರಭು ಯೇಸು ಮನ ಮರುಗಿದರು!          4 ಯೂದ ಮುತ್ತಿನ ಮೂಲಕ "ದೇವರ ಕುರಿಮರಿ ಇದೇ" ಎಂದು ತೋರಿಸಿದ... ಬಲಿಪೀಠ ಕುರಿಮರಿಯ ನೆತ್ತರಿಗಾಗಿ ಹಪಹಪಿಸುತ್ತಿತ್ತು!          5 ಕುರಿಮರಿಯೇ ಕುರಿಗಾಹಿಯನ್ನು ಪರಾಧೀನಪಡಿಸಿದಾಗ ಕುರಿಮಂದೆಯ ಗತಿ !? ಪ್ರಭು ಯೇಸು ಮುಂದಿನದ್ದು ಚಿಂತಿಸಿ ರಕ್ತದ ಬೆವರು ಹರಿಸಿದರು!         6 ಯೂದನ ತುಟಿಗಳು ಪವಿತ್ರವಾದ ಪ್ರಭುವಿನ  ಕೆನ್ನೆಯನ್ನು ಸ್ಪರ್ಶಿಸಿದಾಗ ಮಾರುತ್ತರವಿಲ್ಲದೆ ಪ್ರಭು ಬೋಧಿಸಿದ ಪಾಠ- ಪ್ರೀತಿ ಒಂದು ' ಆಯ್ಕೆ ' !        7 ಒಬ್ಬರನ್ನೊಬ್ಬರು  ಆಲಂಗಿಸಿದಾಗ ಇಬ್ಬರೂ ಸಮಾನವಾಗಿ ಬೆವೆತಿದ್ದರು! ಹೃದಯದಲ್ಲಿ ಇಬ್ಬರಿಗೂ ಹರಿತವಾದ ಗಾಯ ! ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ ಕಾರ್ಮೆಲಿತ್ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ