Posts

Showing posts from 2016

ಕಡಲ ಹೆಣ

Image
ಇಗೋ ನೋಡಿ ದಡ ಸೇರಿದೆ ಕಡಲ ಹೆಣ! ಅದೆಷ್ಟು ನೀರು ಕುಡಿದಿದೆಯೋ ಕಾಣೆ ಸಾಧ್ಯವಾದಷ್ಟೂ ನೀಲಿಯಾಗಿದೆ ವಿಷಪ್ರಾಶನವಾಗಿರಲಿಕ್ಕೂ ಸಾಕು! ತೊಯ್ದಾಡುವ ಅಲೆಗಳ ಉನ್ಮತ್ತ ಸ್ಖಲನಗಳೂ ಇದೀಗ ಮುಚ್ಚಿಟ್ಟ ಸತ್ಯ! ಮರಣೋತ್ತರ ಪರೀಕ್ಷೆಯ ರಿಪೋರ್ಟು ಇನ್ನು ಬರಬೇಕಷ್ಟೇ... ಒದ್ದೇ ಮರಳಿನ ತುಂಬಾ ಹಾಹಕಾರ- ನಿಟ್ಟುಸಿರುಗಳ ಹೆಜ್ಜೆಗುರುತುಗಳು, ಆವಿಯಾಗುವ ನೀಲಹನಿಗಳ ತುಂಬಾ ಅಗಾಧತೆಯ ನಿಗೂಢ ಕನಸುಗಳು; ಕಡಲಿನ ಒಡಲ ಬೇಗೆಯನೆಲ್ಲಾ ಕಣ್ತುಂಬಿಸಿಕೊಂಡ ನಾಯಿಗೂ ಆ ಸಿಂದಾಬಾದಿನದೇ ಚಿಂತೆ; ಒಂದೇ ಒಂದು ಉಬ್ಬರವಿಳಿತ ಸಾಕು ಕಡಲ ಹೆಣವ ಹೂವಾಗಿಸಲು ಗರಿಗೆದರುವ ಬಲೆಗಳ ಹಸಿರಾಗಿಸಲು ಹೊಟ್ಟೆ ಚುರುಗುಟ್ಟುವ ಹರಕಲು ಚಡ್ಡಿಯವನ ಮುಖವರಳಿಸಲು... ಬಾ ಕಡಲೇ ಬಾ... ಈ ಬರಗೆಟ್ಟ ಕಿನಾರೆಗಳ ಇಲ್ಲವಾಗಿಸು ಈ ಕಡಲ ಹೆಣವ ನೋಹನ ನಾವೆಯಾಗಿಸು - ಜಾನ್ ಸುಂಟಿಕೊಪ್ಪ. (ನೋಹ ಬೈಬಲಿನ ಒಬ್ಬ ಪುಣ್ಯ ಪುರುಷ ,ಜಲಪ್ರಳಯ ಬಂದಾಗ ದೇವರ ಆಜ್ನಾನುಸಾರ ಒಂದು ನಾವೆಯನ್ನು ಕಟ್ಟಿ  ಸಕಲ ಜೀವಜಂತುಗಳಲ್ಲಿ ಒಂದೊಂದು ಜತೆಯನ್ನು ಕಾಪಾಡಿದವ.)

ಹಾವು,ಹಕ್ಕಿ ಮತ್ತು ಅಕ್ಕ

> > > ಹೊಸ ವರುಷದ ದಿನ > > > ಮನೆಗೆ ಅಕ್ಕ ಬಂದಾಗಿತ್ತು > > ಸೂಟುಕೇಸಿನೊಂದಿಗೇ...! > > > * * * * * * > > > ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು > > ಸವರುತ್ತಾ ಹತ್ತಿದ ಹಾವು > > ಪೊರೆ ಕಳಚುತ್ತಿತ್ತು... > > ಧಾವಂತದಿಂದ ನಾನು ಓಡಿದ್ದೇ ಓಡಿದ್ದು, > > ಅರ್ಧ ಪೊರೆಯೊಂದಿಗೇ ಹಾವು ಮರೆಯಾಯಿತು, > > ಬೇಲಿಗೆ ಅಡರಿದ ಉಳಿದ ಪೊರೆಗೆ ಕೈ ಚಾಚಿದೆ- > > 'ದೂರ ಹೋಗೋ..ಮುಟ್ಟಬ್ಯಾಡ,,,' > > ಅಕ್ಕ ಅರಚಿದಳು, > > ಅವಳ ಬಾಲವನ್ನೇ ಮೆಟ್ಟಿದ್ದೇನೆಂಬಂತೆ! > > > > * * * * * > > > > ಪಂಜರದಲ್ಲಿನ ಆ ಹಕ್ಕಿ ಪಿರಿಪಿರಿಗುಟ್ಟುತ್ತಿದೆ, > > ಅಕ್ಕನ ಆಲಾಪವೂ ಪೊರೆ ಕಳಚುವಂತಿದೆ, > > ಇಬ್ಬರದೂ ಎಂತಹ ಸಂಧಾನವೋ ಕಾಣೆ > > ಅಕ್ಕ ತೆರೆದ ಬಾಗಿಲಲೇ > > ಹಕ್ಕಿ ತೇಲಿ ಅನಂತತೆಯಲಿ ಲೀನವಾಯಿತು > > > * * * * * * > > > > ನೆತ್ತಿಗೇರಿದ ಪಿತ್ತದೊಂದಿಗೇ > > ಅಕ್ಕಳ ಹುಡುಕಿದೆ > > ಅವಳು ವಯ್ಯಾರದಿಂದ ಪುಸ್ತಕದಲ್ಲಿ ಮುಳುಗಿದ್ದಳು, > > 'ಹಕ್ಕಿಯಂತೆ ಹಾರುವುದು ಹೇಗೆ!? > > > > > > > ಕೊಂ

ಭಯ

ನೀರಿಗೆ ಎಸೆದ ಚಪ್ಪಟೆ ಕಲ್ಲು ಅವಸರವಸರವಾಗಿ ಕೊಳದ ಗಡಿ ದಾಟಿದ್ದು ಕಂಡು ಹೃದಯ ಕಸಕ್ಕೆಂದಿತು ! ಪಕ್ಕದ ಮನೆಯ ಹಸುಗೂಸು ಒಂದೇ ಸಮನೆ ಅಳುತ್ತಿದೆ; ಜಗತ್ತಿನ ಕೊಳದಲ್ಲಿ ಇನ್ನೊಂದು ಕಲ್ಲು ಇಳಿದು ಬರುವುದ ಚಿಂತಿಸಿಯೇ ಹೃದಯ ಮೊಣಕಾಲೂರಿತು. ಕೊಳದಲ್ಲಿ ಎದ್ದು ನಿಂತ ಅಲೆಗಳ ಮೇಲೆ ಇದೀಗ ಸೂರ್ಯನ ಕಿರಣಗಳ 'ಜಮಾಅತ್' ಆರಂಭವಾಗಿದೆ. ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ. ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ.

***** ಮತ್ತೆ ಮತ್ತೆ ಸಮ್ಮಿಲನ *****

ಸರಕಾರಿ ಶಾಲೆಯೆಂದರೆ ಅದೊಂದು ವಿಭಿನ್ನ ಜಗತ್ತು.ಸಿಂಬಳ ಜಾರುವ ಮೂಗು,ಧೂಳು ಮೆತ್ತಿದ ಚಡ್ಡಿ,ಕಣ್ಣ ಆಳದಿಂದೆಲ್ಲೋ ಸದ್ದಿಲ್ಲದೇ ಕೇಳುವ ಅಸಹಾಯ ಆಕ್ರಂದನ,ಛಿಲ್ಲೆನ್ನುವ ಕಣ್ಣೀರು,ಅಪ್ಪ ಯಾರೋ!?ಅಮ್ಮ ಯಾರೋ?! ಅಜ್ಜ-ಅಜ್ಜಿಯರನ್ನೇ ಸರ್ವಸ್ವವೆಂದರಿತ ಪುಟ್ಟ ಹೃದಯ,ಓಡಿ ಹೋದ ಅಮ್ಮನನ್ನೇ ಸದಾ ಹುಡುಕುವ ಕಂಗಳು,,ಗಪ್ಪೆನ್ನುವ ಹೆಂಡ-ಬೀಡಿಯ ವಾಸನೆಯನ್ನು ರಕ್ತಗತವಾಗಿಸಿಕೊಂಡು ನಿರ್ಲಿಪ್ತರಾದ ಎಳೆಯ ಜೀವಗಳು.. ಕಣ್ಣ ಮುಂದೆಯೇ ನಡೆವ ಮಬ್ಬುಗತ್ತಲ ತೂರಾಟಕ್ಕೆ,ಬಡಿದಾಟಕ್ಕೆ,ಕೊಸರಾಟಕ್ಕೆ ಮೂಕಸಾಕ್ಷಿಗಳು,ಚಪ್ಪಲಿಯಿಲ್ಲದ ಕಾಲಿನಲ್ಲೇ ಕುಂಟುಬಿಲ್ಲೆ ,ಜೂಟಾಟ ಆಡಿ ಜಗತ್ತು ಗೆಲ್ಲುವ ಛಲದ ಮಲ್ಲರು,ಕರುಳು ಕಿತ್ತು ತಿನ್ನುವ ಹೊಟ್ಟೆ ಹಸಿವಿದ್ದರೂ ಚೀಪಿ ಚೀಪಿ ಕುಡಿವ ಜಿಗಣೆಗಳಿಗೆ ಉದಾರವಾಗಿ ನೆತ್ತರು ದಾನ ಮಾಡುವ ಅಮಾಯಕರು,.. ಈ ನೋವಿನ-ಹಸಿವಿನ ನಡುವೆಯೂ ಬಾಯಿ ತುಂಬಾ ಗಲಗಲ ನಕ್ಕು ಪಾಠ ಕೇಳುವ ಹೃದಯವಂತ ಜ್ನಾನದ ಕಂದಮ್ಮಗಳು,,,,, ಇದು ಮುಗಿಯೋಲ್ಲ ಕಣ್ರೀ,,,, ಸರ್ಕಾರಿ ಶಾಲೆಗಳನ್ನು,ಅವುಗಳ ಕಾರ್ಯ ವೈಖರಿಯನ್ನು ಉಡಾಫೆಯಿಂದ ಕಾಣುವ ತಣ್ಣಗಿನ ರಕ್ತದ ಪ್ರಾಣಿಗಳನ್ನು ಕಂಡಾಗೆಲ್ಲಾ ಬೇಸರವಾಗುತ್ತದೆ. ಆದ್ರೆ ಬಹಳಷ್ಟು ಜನರಿದ್ದಾರೆ , ಸುಮ್ಮಗೇ ಕೂತುಬಿಟ್ಟ ಆ ನಾಲ್ಕುನಾಡು ಅರಮನೆಯನ್ನೂ, ಸದಾ ಹಸಿರು ಹೊದ್ದು ತೂಕಡಿಸುವ ತಡಿಯಂಡಮೋಳನ್ನೂ ಕಣ್ತುಂಬಿಸಲು ಬಂದವರು ಒಮ್ಮೆ ಇಣುಕಿ ನೋಡಿ "ಓ,. ಇಲ್ಲೇನೋ ನಡಿತಿದೆ ,,,,,"ಎಂದು ಕೈ ಬೀಸುತ್ತಾರ

*** ಹೊತ್ತು ***

ಹೊತ್ತು ಮುಳುಗುತ್ತದೆ ಮತ್ತು ನಾನೂ.... ನಿರೀಕ್ಷೆಗಳಿಲ್ಲದ ಆಳಕ್ಕೆ ಕುಸಿಯುತ್ತಿರುವೆ,... ಈ ಆಯಾಸ- ಕಣ್ಣಪೊರೆಯ ಮಂಕು ಎಚ್ಚರಿಸುತ್ತದೆ, ತಟ್ಟಿ ತಟ್ಟಿ ಎಬ್ಬಿಸುತ್ತದೆ., ಬಹುಶಃ..... ಹೊತ್ತು ಮುಳುಗಿದ ನಂತರ ಹೊಸ ಬದುಕಿದೆ... ಹೊಸ ಬದುಕಿದೆ... - ಜಾನ್ ಸುಂಟಿಕೊಪ್ಪ.

***** ವೃಣ *****

ನನ್ನೊಳಗಿನ ವೃಣದ ನೋವೆಲ್ಲಾ ಹಾಡಾಗಿ ಹೊರಹೊಮ್ಮಿದೆ; ಆ ಹಾಡು ವಿಷಾದವಾಗಿ ರಾಗ ಮೀರಿ ಗೋಡೆಗೋಡೆಗಳಲೂ ಸೂತಕ, ಕಿಟಕಿ ಬಾಗಿಲುಗಳ ತುಂಬಾ ಅನುಕಂಪ; ನನ್ನೊಳಗಿನ ವೃಣದ ತುಂಬಾ ಸಾವು-ಬದುಕಿನ ಚರ್ಚೆ,,, ದೇಹ ತುಂಬಾ ನೋವಂತೆ ಆತ್ಮಕ್ಕೆಲ್ಲಿದೆ ಚಿಂತೆ,,,, ಇದೀಗ,,, ನಾನು ಆತ್ಮವೆಂದು ಅರಿತು ವೃಣಗಳನ್ನೆಲ್ಲಾ ಹಣತೆಯಾಗಿಸುತ್ತಿದ್ದೇನೆ, ಆ ಹಣತೆಯಿಂದೊಮ್ಮುವ ಕಾಂತಿ ಕಿಟಕಿ ಬಾಗಿಲುಗಳ ಸಂತೈಸಬೇಕಿದೆ,,,, ಬದುಕನ್ನು ಬೆಳಗಿಸಬೇಕಿದೆ,,,.. - ಜಾನ್ ಸುಂಟಿಕೊಪ್ಪ.

***** ಕವಿತೆಯಾಗುವುದೆಂದರೇನು!?*****

ಕವಿತೆಯಾಗುವುದೆಂದರೇನು!? ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ ಬೀದಿ ನಾಯಿಗೆ ಲೈಟುಗಂಬವೊಂದು ಕೇಳಿತು,... ಕತ್ತಲೊಳಗಿನ ಬೆಳಕನ್ನು ಬೆಳಕಿನೊಳಗಿನ ಕತ್ತಲನ್ನೂ ಕಂಡು ಊಳಿಡುವುದೇ ಕವಿತೆಯೆಂದಿತು ನಾಯಿ ಲೈಟುಗಂಬಕ್ಕೂ ನಿಜವೆನ್ನಿಸಿತೇನೋ,,, ಅಷ್ಟಕ್ಕೇ ಕರೆಂಟು ಹೋಗಿ ಕತ್ತಲಿಗೂ ಬೆಳಕಿಗೂ ಕಾದಾಟವಾಗಿ ಬೀದಿಯುದ್ದಕ್ಕೂ ಊಳಿಡುವಿಕೆ ಕವಿತೆಯಾಯಿತು,,... ಕವಿತೆಯಾಗುವುದೆಂದರೇನು!? ಪರಪರ ಕೆರೆದುಕೊಳ್ಳುತ್ತಾ ಕಾಲನೆಳೆದು ನಡೆಯುತ್ತಿದ್ದ ಹುಚ್ಚನಿಗೆ ರಸ್ತೆಯೊಂದು ಕೇಳಿತು,,, ಮಾತಿನೊಳಗಿನ ಅರ್ಥವನ್ನು ಅರ್ಥದೊಳಗಿನ ಮಾತನ್ನೂ ಕಂಡು ಗಲಗಲ ನಕ್ಕು ಅಳುವುದೇ ಕವಿತೆಯೆಂದ ರಸ್ತೆಗೂ ನಿಜವೆನ್ನಿಸಿತೇನೋ... ಅಷ್ಟಕ್ಕೇ 'ಅದು-ಇದು' ತಿನ್ನುವವರ ನಡುವೆ ಗಲಭೆಯಾಗಿ ಮಾತಿಗೂ ಅರ್ಥಕ್ಕೂ ಕಾದಾಟವಾಗಿ ರಸ್ತೆಯುದ್ದಕ್ಕೂ ನಗು-ಅಳು ಕವಿತೆಯಾಯಿತು,,., ಇದೀಗ,... ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದವಾಗಿ ಕವಿತೆಯ ಕೊಲೆಯಾಗಿದೆ,,,, - ಜಾನ್ ಸುಂಟಿಕೊಪ್ಪ.

*****ಅಪ್ಪಾ*****

ವಾತ್ಸಲ್ಯದ ಕಣಿವೆಯ ತುಂಬಾ ಕಾನೆಳೆದುಕೊಂಡು ಹುಡುಕುತ್ತಿರುವೆ ಹತ್ತಿ - ಇಳಿವ ಪಡಿಪಾಟಲು ಕಂಡು ಕಲ್ಲು ಮುಳ್ಳುಗಳು ನಕ್ಕಿವೆ; ಕಿತ್ತು ಬಂದ ಹೃದಯ ತೊಟ್ಟಿಕ್ಕುವ ನೆತ್ತರು ಹೆಜ್ಜೆಗುರುತುಗಳ ಕೆಂಪಾಗಿಸಿದೆ,. ದುಃಖದ ಉಮ್ಮಳಿಕೆ ಮಾರ್ದನಿಸಿದೆ ಕಣಿವೆಯ ಹೆಬ್ಬಂಡೆಗೂ ಕೂಡಾ ಜಿನುಗುವ ಕಣ್ಣೀರು ,... ಅಪ್ಪಾ ನೀನೆಲ್ಲಿರುವೆ?! ನಿನ್ನ ಮಣ್ಣಾಗಿಸಿದ ಮಣ್ಣು ನಿರ್ಲಿಪ್ತ,..... ಚಿಗುರಿದ ಹಸುರಿನಲೊಂದು ಹೂಮೊಗ್ಗ ನಸುನಗು,,, ಸೊಂಯ್ಯನೆ ಬೀಸುವ ಸುಳಿಗಾಳಿಗೆ ನಿನ್ನ ಬೊಗಸೆಯಷ್ಟು ಬಿಸುಪು,,, ಕನಸು-ಮನಸು-ಗಂಟಲು ಬಿಗಿದು ಎಲ್ಲೆಲ್ಲೂ ಮೌನ,,,, ಇರಲಿ... ಹೀಗೇ ಇರಲಿ, ಅಪ್ಪನೆಂಬ ಅಪ್ಪನ ಪ್ರೀತಿ ಹೀಗೆಯೇ ಇರಲಿ,,,, ಇಲ್ಲವಾದರೆ ಒಮ್ಮೆ ನಾನು ಸತ್ತು ಹೋದೇನು,,. ನಿನ್ನ ಪ್ರೇಮದ ಸವಿನೆನಪುಗಳ ಮರೆತು ಬಿಟ್ಟೇನು.... ಮರೆತು ಬಿಟ್ಟೇನು,... - ಜಾನ್ ಸುಂಟಿಕೊಪ್ಪ.

***** ಗಾಯದ ಹೂಗಳು ಮತ್ತು ನನ್ನ ಪಾಡಿಗೆ ನಾನು*****

Image
ಸಮಕಾಲೀನ ಕನ್ನಡ ಕಾವ್ಯಜಗತ್ತು ಗಾಯದ ಹೂಗಳನ್ನು ಪ್ರೀತಿಯಿಂದ ನೇವರಿಸಿದ್ದೇ ನನ್ನಲ್ಲೊಂದು ರೋಮಾಂಚನವಾಯಿತು.ಬಹುಶಃ ಕಾಜೂರರ ಕವಿತೆಗಳ ರುಚಿ ಹತ್ತಿಸಿಕೊಂಡ ಪ್ರತಿಯೊಬ್ಬರಿಗೂ ಈ ಸಂಚಲನವಾಗಿರಬಹುದೇನೋ,..   ಅಪರೂಪದ ಮಾತು,ಅದರಲ್ಲಿರುವ ಅಗಾಧ ಆಪ್ತತೆ ಮತ್ತು ಸದಾ ಕಾಡುವ ಅವರ ಮುಗ್ಧತೆ,,,. ಕಾಜೂರರ ಬಗ್ಗೆ ಬರೆದಷ್ಟೂ ಸಾಲದು.ಕಾಲೇಜ್ ಮೇಟಾಗಿ,ಒಂದೇ ಸಂಸ್ಥೆಯಲ್ಲಿ ದುಡಿದು ನಂತರ ಇದೀಗ ಒಂದೇ ಇಲಾಖೆಯಲ್ಲಿ ದುಡಿಯುತ್ತಿದ್ದರೂ ಓರ್ವ ಶಿಕ್ಷಕನಾಗಿ,ಕವಿಯಾಗಿ ಗುರುತಿಸಿದಕ್ಕಿಂತ ಒಬ್ಬ ಜೀವದ ಗೆಳೆಯನಾಗಿ ನನ್ನ ಹೃದಯದಲ್ಲಿ ಸದಾ ಬೆಚ್ಚಗಿರುವುದು ನಿಜಕ್ಕೂ ನನಗೆ ಹೆಮ್ಮೆಯ ವಿಷಯ.ಕಾಜೂರರ ಕಾವ್ಯಲಹರಿಯನ್ನು ಆಸ್ವಾದಿಸುವಲ್ಲಿ ಈ ಲೇಖನ ನಿಮ್ಮನ್ನು ಪ್ರೇರೇಪಿಸಿದಲ್ಲಿ ಅದು ನನ್ನ ಪಾಲಿನ ಸೌಭಾಗ್ಯ.     " ಎದೆ ಸೀಳಿ        ತಲೆ ಸೀಳಿ        ಚರಿತ್ರೆ ಸೀಳಿ        ತೋರಿಸುವುದೆಲ್ಲ ಕಷ್ಟದ ಕೆಲಸ,,." ಎಂದು ಹಾಡಿಕೊಳ್ಳುವ ಸತೀಶ್ ಬಹಳಷ್ಟು ಸಹೃದಯರಿಗೆ ಒಂದು ವಿಸ್ಮಯ,ನಿಗೂಢ ಪ್ರಶ್ನೆ,,,,,ಒಬ್ಬ ಜೆನ್ ಗುರುವಿನಂತೆ,ಪ್ರವಾದಿಯಂತೆ ತನ್ನಷ್ಟಕ್ಕೆ ಹಾಡಿಕೊಳ್ಳುವ ಸತೀಶ್ ಬೆಳಕಿನೊಂದಿಗೆ ಕತ್ತಲನ್ನೂ ಪ್ರೀತಿಸುವವರು,ನಲಿವಿನಂತೆಯೇ ನೋವನ್ನೂ ಬಾಚಿ ತಬ್ಬಿಕೊಂಡಿರುವವರು.ಅದಕ್ಕೇನೋ ಅವರ ಗಾಯಗಳು ಹೂವಾಗಿ ಆಮೇಲೆ ಕವಿತೆಗಳಾಗಿ ನಮ್ಮನ್ನು ಈ ಪರಿಯಾಗಿ ಕಾಡುತ್ತಿರುವುದೇನೋ,,,       'ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳುಗಳು

****** ಸಮ್ಮಿಲನ ******

Image
ತನ್ನಷ್ಟಕ್ಕೇ ಹಾಡಿಕೊಳ್ಳುವ ಝರಿ,ಒಂದು ಚೂರೂ ತೂಕಡಿಸದೆ ನಿದ್ರಿಸುತ್ತಿರುವ ಆ ದೈತ್ಯಾಕಾರದ ಬೆಟ್ಟಗುಡ್ಡಗಳು,ಒಳಗೂ-ಹೊರಗೂ ನಿಗೂಢತೆಯನ್ನು ಹೊದ್ದುಕೊಂಡು ಸುಮ್ಮಗೇ ನಿಂತಿರುವ ನಾಲ್ಕುನಾಡು ಅರಮನೆ,ಸದ್ದಿಲ್ಲದೆ ಬಿದ್ದುಕೊಂಡ ಕಾಫಿತೋಟಗಳು ನನ್ನ ಶಾಲೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.ಶಾಲೆಯಿಂದ ಹೊರಬರುವ ಹೆಣ್ಣುಗಂಡುಗಳೆಂಬ ಪ್ರಾಣಿಗಳು ಯಂತ್ರಗಳಾಗಿ ರೂಪಾಯಿಯ ಅಮಲಿನಲ್ಲಿ ತೂರಾಡಿ ಈ ಹಸಿರನ್ನು ಕ್ರಮೇಣ ಇಲ್ಲವಾಗಿಸುತ್ತವೆ ಎಂದಷ್ಟೇ ಅವು ಬಲ್ಲವು,,, ವೀಕೆಂಡುಗಳ ಮೋಜುಮಸ್ತಿಗಾಗಿ ಕೂಡಿಟ್ಟಿದ್ದನ್ನೇ ಕರಗಿಸಲಿಕ್ಕಾಗಿ ಬಣ್ಣಬಣ್ಣದ ಕಾರುಗಳಲ್ಲಿ ತೇಲಿಬರುವವರು,ತಮ್ಮ ಬೆತ್ತಲುತನವನ್ನು ಸಾರಿಸಾರಿ ಹೇಳುವವರು,ಮಾನವೀಯತೆ-ಶಿಸ್ತು-ಸಂಸ್ಕೃತಿಯನ್ನು ರಮ್ಮು ವಿಸ್ಕಿ ಬಿಯರಿನ ಟಿನ್ನುಗಳಲ್ಲೇ ಆವಾಹಿಸಿಕೊಳ್ಳುವವರು ನಮ್ಮ ಶಾಲೆಯನ್ನು 'ಕಾರ್ ಪಾರ್ಕಿಂಗ್' ಎಂದಷ್ಟೇ ತಿಳಿದಿದ್ದಾರೆ,,, ಮೊನ್ನೆಮೊನ್ನೆ ನಡುಗುವ ಚಳಿಯಲ್ಲಿ ಮೂಡಿಬಂದ ಕ್ರಿಸ್ಮಸ್ ವೀಕೆಂಡ್ ನಮಗೆ ಮರೆಯಲಾಗದ ದಿನ.ಮಕಾಡೆ ಬಿದ್ದುಕೊಂಡಿರುವ ನಮ್ಮ ಶಾಲೆಯ ಮೈದಾನದಲ್ಲಿ ರಂಗೋರಂಗು...ಅದ್ಯಾವ್ಯಾವ ಊರುಗಳ ಕಾರುಗಳು ತೇಲಿ ಬಂದಿದ್ದವೋ ಕಾಣೆ,ಆದರೆ ಬೆಂಗಳೂರಿನಿಂದ ತೇಲಿಬಂದ ಬಿಳಿಯ ಕಾರೊಂದು ನಮಗೆಲ್ಲರಿಗೂ ಬೆಚ್ಚಗಿನ ಪ್ರೀತಿಯನ್ನೇ ಹರಿಸಿತು. ಯು.ಎಸ್.ಎ ನಲ್ಲಿ ದುಡಿದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಶ್ರೀ ಗುರುಪ್ರಸಾದ್ ಹಾಗೂ ಶ್ರೀಮತಿ ಪೂರ್ಣಿಮಾ ರವರು