ನಾನು ಆತ್ಮಸಾಕ್ಷಿ ಕಳಕೊಡ ದಿನ ನನ್ನೊಳಗಿನ ಸೈತಾನ ದಡಬಡಿಸಿ ಎದ್ದು ಕೂತ; ನಾನು ಆತ್ಮಸಾಕ್ಷಿ ಕಳಕೊಂಡ ದಿನ ಏಸುವಿಗೆ ಕೆಲಸವಿಲ್ಲದಾಯಿತು; ನಾನು ಆತ್ಮಸಾಕ್ಷಿ ಕಳಕೊಂಡ ದಿನ ನನ್ನ ಕಾವಲುಧೂತ ಬಿಕ್ಕಿಬಿಕ್ಕಿ ಅಳುತ್ತಿದ್ದ; ನಾನು ಆತ್ಮಸಾಕ್ಷಿ ಕಳಕೊಂಡ ದಿನ ಕಲ್ವಾರಿಗೆ ಲೋಡುಗಟ್ಟಲೆ ಮೊಳೆಗಳು ಸರಬರಾಜಾದುವು; ನಾನು ಆತ್ಮಸಾಕ್ಷಿ ಕಳಕೊಂಡ ದಿನ ಬೀದಿಬೀದಿಯಲಿ ಸೈತಾನನಿಗೆ ವಿಜಯೋತ್ಸವ; ನಾನು ಆತ್ಮಸಾಕ್ಷಿ ಕಳಕೊಂಡ ಆ ದಿನ ನನ್ನೊಳಗಿನ ನರಕಕ್ಕೇ ಸ್ವಾತಂತ್ರ್ಯ.. 'ದೇಶಭಕ್ತರ' ಈ ನರಕದಲ್ಲಿ ನನಗೇ ಪಿತಾಮಹನ ಪಟ್ಟ! - ಜಾನ್ ಸುಂಟಿಕೊಪ್ಪ. http://johnsunticoppa.blogspot.com/2017/03/blog-post.html

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..